ಮೊರಾಕೊ, ಸೆ. 22 (DaijiworldNews/AA): ಪಿಒಕೆ ಸ್ವತಃ ನಾನೂ ಭಾರತ ಎಂದು ಹೇಳುತ್ತದೆ, ಆ ದಿನ ಬರುತ್ತದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಮೊರಾಕೋದಲ್ಲಿ ಮಾತನಾಡಿದ ಅವರು, "ಪಿಒಕೆ ಒಂದಲ್ಲಾ ಒಂದು ದಿನ ಭಾರತಕ್ಕೆ ಸೇರೇ ಸೇರುತ್ತೆ. ನಾವು ಪಿಒಕೆ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಳ್ಳುವ ಅಗತ್ಯವಿಲ್ಲ, ಅದು ಹೇಗೂ ನಮ್ಮದು, ಪಿಒಕೆ ಸ್ವತಃ ನಾನೂ ಭಾರತ ಎಂದು ಹೇಳುತ್ತದೆ, ಆ ದಿನ ಬರುತ್ತದೆ" ಎಂದು ಹೇಳಿದರು.
"ನಾವು ಬಯಸಿದರೆ, ಪಾಕಿಸ್ತಾನದಲ್ಲಿ ನಾವು ಯಾವುದೇ ಮಿಲಿಟರಿ ಅಥವಾ ನಾಗರಿಕರನ್ನು ಗುರಿಯಾಗಿಸಿಕೊಂಡು ಮೇಲೆ ದಾಳಿ ಮಾಡಬಹುದಿತ್ತು, ಆದರೆ ನಾವು ಹಾಗೆ ಮಾಡಲಿಲ್ಲ. ಭಾರತದ ಈ ಗುಣವನ್ನು ನಾವು ಉಳಿಸಿಕೊಳ್ಳಬೇಕು. ಭಯೋತ್ಪಾದಕರು ಇಲ್ಲಿಗೆ ಬಂದು ನಮ್ಮ ನಾಗರಿಕರನ್ನು ಅವರ ಧರ್ಮವನ್ನು ಕೇಳಿ ಕೊಂದರು. ನಾವು ಯಾರನ್ನೂ ಅವರ ಧರ್ಮವನ್ನು ನೋಡಿ ಕೊಂದಿಲ್ಲ, ಆದರೆ ಅವರ ಕಾರ್ಯಗಳನ್ನು ನೋಡಿ ಕೊಂದಿದ್ದೇವೆ" ಎಂದರು.
"ಭಾರತದ ಮೇಲಿನ ನಮ್ಮ ಭಕ್ತಿ, ವಾತ್ಸಲ್ಯ ಮತ್ತು ಪ್ರೀತಿ ಸಹಜ. ನಾವು ಜಗತ್ತಿನ ಎಲ್ಲೇ ಇದ್ದರೂ, ನಾವು ಭಾರತೀಯರು ಎಂಬುದನ್ನು ಎಂದಿಗೂ ಮರೆಯಬಾರದು. ಭಾರತೀಯರಾಗಿರುವುದರಿಂದ ನಮ್ಮ ಜವಾಬ್ದಾರಿಗಳು ಇತರರಿಗಿಂತ ಭಿನ್ನವಾಗಿವೆ. ನಾವು ಜೀವನೋಪಾಯವನ್ನು ಗಳಿಸುತ್ತಿದ್ದರೆ ಮತ್ತು ಮೊರಾಕೊದಲ್ಲಿ ನಮ್ಮ ಕುಟುಂಬಗಳನ್ನು ನೋಡಿಕೊಳ್ಳುತ್ತಿದ್ದರೆ, ಮೊರಾಕೊಗೆ ಯಾವುದೇ ದ್ರೋಹ ಮಾಡಬಾರದು ಇದು ಭಾರತದ ಗುಣ" ಎಂದು ತಿಳಿಸಿದರು.