ದುಬೈ, ಜೂ. 16 (DaijiworldNews/AA): ಎಂಸಿಸಿ ಬ್ಯಾಂಕ್ ದುಬೈನ ಕರಾಮದಲ್ಲಿರುವ ವಿನ್ನಿಸ್ ರೆಸ್ಟೋರೆಂಟ್ನಲ್ಲಿ ಅನಿವಾಸಿ ಭಾರತೀಯರ ಯಶಸ್ವಿ 'ಒಳನೋಟಗಳು ಮತ್ತು ಸಂವಹನ' ಸಭೆಯನ್ನು ಜೂನ್ 15 ರ ಸಂಜೆ 6 ಗಂಟೆಗೆ ಆಯೋಜಿಸಿತ್ತು.

ಈ ಕಾರ್ಯಕ್ರಮದ ನೇತೃತ್ವವನ್ನು ದುಬೈನಲ್ಲಿ ನೆಲೆಸಿರುವ ಮಂಗಳೂರಿನ ಪ್ರಮುಖ ವ್ಯಕ್ತಿ ದಯಾನ್ ಡಿಸೋಜಾ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ಯಾಂಕಿಂಗ್ ಮತ್ತು ಎಂಸಿಸಿ ಬ್ಯಾಂಕಿನ ಪ್ರಸ್ತುತ ಸ್ಥಿತಿಯ ಬಗ್ಗೆ ವಿವರಿಸಿದರು. ಬಳಿಕ ಮಂಗಳೂರಿನ ಮತ್ತೊಬ್ಬ ಸುಪ್ರಸಿದ್ಧ ವ್ಯಕ್ತಿ ವಾಲ್ಟರ್ ನಂದಳಿಕೆ ಅವರು, 'ಒಂದು ಸಾಮಾನ್ಯ ಗುರಿಯ ಸುತ್ತ ಸಮುದಾಯವನ್ನು ಒಗ್ಗೂಡಿಸುವ ಬಗ್ಗೆ' ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂಸಿಸಿ ಬ್ಯಾಂಕ್ ಲಿಮಿಟೆಡ್ನ ಅಧ್ಯಕ್ಷರಾದ ಅನಿಲ್ ಲೋಬೋ ಅವರೊಂದಿಗೆ ಆಕರ್ಷಕ ಅಧಿವೇಶನ ನಡೆಯಿತು. ಅವರು ಪಾಲ್ಗೊಂಡವರೊಂದಿಗೆ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಅನಿಲ್ ಅವರು ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು ಮತ್ತು ನಂತರದ ಎಂಸಿಸಿ ಬ್ಯಾಂಕಿನ ಸ್ಥಿತಿ ಮತ್ತು ಹಲವು ವರ್ಷಗಳ ಅದರ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು.
ಅವರು ಎಂಸಿಸಿ ಬ್ಯಾಂಕಿನ ಇತಿಹಾಸದ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವಿವರಿಸಿದರು. ಹೊಸ ಶಾಖೆಗಳು ಮತ್ತು ಆನ್ಲೈನ್ ಉಪಸ್ಥಿತಿಯ ಮೂಲಕ ಬ್ಯಾಂಕನ್ನು ಬೆಳೆಸುವ ತಮ್ಮ ಭವಿಷ್ಯದ ಯೋಜನೆಗಳನ್ನು ಸಹ ಅವರು ಹಂಚಿಕೊಂಡರು. ಈ ಸಭೆಯು ಕಲಿಕೆ ಮತ್ತು ನೆಟ್ವರ್ಕಿಂಗ್ನ ಸ್ಮರಣೀಯ ಸಂಜೆಯಾಗಿ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿತು.
ಈ ಕಾರ್ಯಕ್ರಮದಲ್ಲಿ ಜೋಸೆಫ್ ಮಥಿಯಾಸ್, ಸ್ಟೀಫನ್ ಮೆನೆಜಸ್ ಸೇರಿದಂತೆ ದುಬೈನ ಪ್ರಮುಖ ಉದ್ಯಮಿಗಳು, ಸಾಮಾಜಿಕ-ಸಾಂಸ್ಕೃತಿಕ ಸ್ವಯಂಸೇವಕರು ಭಾಗವಹಿಸಿದ್ದರು. ರೋಷನ್ ಡಿಸಿಲ್ವಾ ಕಾರ್ಯಕ್ರಮವನ್ನು ನಿರೂಪಿಸಿದರು. ಅಲ್ವಿನ್ ಪಿಂಟೋ ವಂದನಾರ್ಪಣೆ ಮಾಡಿದರು.
ಎಂಸಿಸಿ ಬ್ಯಾಂಕ್ ಲಿಮಿಟೆಡ್ ಸಹಯೋಗದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮವು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪಾಲ್ಗೊಂಡವರು ಮಾಹಿತಿಪೂರ್ಣ ಚರ್ಚೆಗಳು ಮತ್ತು ಆತ್ಮೀಯ ಆತಿಥ್ಯವನ್ನು ಶ್ಲಾಘಿಸಿದರು.