ಮುಂಬೈ, ಏ. 02 (DaijiworldNews/AK): ನಿತೀಶ್ ತಿವಾರಿ ನಿರ್ದೇಶನದ `ರಾಮಾಯಣ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಮರ್ಯಾದಾ ಪುರುಷೋತ್ತಮನ ಗೆಟಪ್ನಲ್ಲಿ ರಣಬೀರ್ ಕಪೂರ್ ಕಂಗೊಳಿಸಿದ್ದಾರೆ.

ಹನುಮ ಜಯಂತಿ ಹಿನ್ನೆಲೆ ಸಿನಿಮಾದ ಟೀಸರ್ನ್ನು ಇಂದು ರಿಲೀಸ್ ಮಾಡಿದ್ದಾರೆ. ಮರ್ಯಾದಾ ಪುರುಷೋತ್ತಮ ರಾಮನ ರಾಜ್ಯಭಾರಾದಿಂದ ಹಿಡಿದು ವನವಾಸಕ್ಕೆ ತೆರಳುವವರೆಗಿನ ಸಣ್ಣ ತುಣುಕನ್ನ ವಿವರಿಸಿದ್ದಾರೆ. ಪಟ್ಟಾಭಿಷೇಕ, ರಾಮ ವನವಾಸಕ್ಕೆ ತೆರಳುವುದು, ಸೀತೆಯ ಅಪಹರಣವನ್ನು ತೋರಿಸಿದ್ದಾರೆ. ರಾವಣನ ಪಾತ್ರದ ಪುಟ್ಟದೊಂದು ಝಲಕ್ ತೋರಿಸಿದ್ದು, ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸುವುದನ್ನು ತೋರಿಸಿದ್ದಾರೆ.
ನಿತೇಶ್ ತಿವಾರಿ ನಿರ್ದೇಶಿಸಿರುವ `ರಾಮಾಯಣ’ ಚಿತ್ರವನ್ನ ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಹಾಗೂ ನಮಿತ್ ಮಲ್ಲೋತ್ರಾ ಜಂಟಿಯಾಗಿ ನಿರ್ಮಿಸಿದ್ದಾರೆ. ಹನುಮಂತನ ಲುಕ್ನ್ನ ಸೀಕ್ರೆಟಾಗಿ ಇಡಲಾಗಿದೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿದ್ದಾರೆ. ಬಹುತಾರಾಗಣದ ರಾಮಾಯಣದ ಫಸ್ಟ್ ಪಾರ್ಟ್ ನವೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ.