ಉಡುಪಿ, ಜೂ. 22 (DaijiworldNews/TA): ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ ಶತಮಾನಗಳಿಂದ ಆರಾಧಿಸಲ್ಪಡುತ್ತಿರುವ ಪ್ರಸಿದ್ಧ ದೇವಾಲಯವಾಗಿದ್ದು ಸದ್ಯ ಇಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ನಡುವೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಅವರು ಜೀರ್ಣೋದ್ದಾರ ನಡೆಯುತ್ತಿರುವ ದೇವಾಲಯಕ್ಕೆ ಭೇಟಿ ನೀಡಿದರು.

ಸದ್ಯ ಸಿನಿಮಾ ಒಂದರ ಕೆಲಸದಲ್ಲಿ ಪೆರ್ಡೂರು ಆಸುಪಾಸು ತಂಗಿರುವ ರಕ್ಷಿತ್, ದೇಗುಲಕ್ಕೆ ತೆರಳಿ ಮುಷ್ಟಿ ಕಾಣಿಕೆ ಸಮರ್ಪಿಸಿದರು. ದೇವಾಲಯದ ಜೀರ್ಣೋದ್ಧಾರದ ವೇಳೆ ಮುಷ್ಟಿ ಕಾಣಿಕೆ ಸಮರ್ಪಿಸಿ ಕೈಜೋಡಿಸುವ ಪರಿಪಾಠ ಇದೆ. ಹಲವು ಶತಮಾನಗಳ ಇತಿಹಾಸ ಇರುವ ಈ ಅನಂತಪದ್ಮನಾಭ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಮುಷ್ಟಿ ಕಾಣಿಕೆ ಅರ್ಪಿಸುವ ಮೂಲಕ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ. ದೇವಾಲಯದ ಸಿಬ್ಬಂದಿ ನಟನಿಗೆ ಸಾಥ್ ನೀಡಿದ್ದಾರೆ.